ಕಡೂರು: ಬುಧವಾರ ರಾತ್ರಿ ಸುರಿದ ಮಳೆಗೆ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಲ್ಲೇಶ್ವರ ಬಳಿ ಆವತಿ ನದಿ ನೀರು ಕಡೂರು- ಮರವಂಜಿ ರಸ್ತೆ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರ ದುಸ್ತರವಾಗಿದೆ.
ರಸ್ತೆ ಮೇಲೆ ಎರಡು ಅಡಿಗೂ ಹೆಚ್ಚು ನೀರು ರಭಸದಿಂದ ಹರಿಯುತ್ತಿದ್ದು, ಇಲ್ಲಿರುವ ಮಾರುತಿ ಬಡಾವಣೆಗೆ ಹೋಗುವ ದಾರಿ ಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ನಿವಾಸಿಗಳು ಒಂದು ಕಿ.ಮೀ. ಬಳಸಿ ಬರಬೇಕಿದೆ.

