ಕಡೂರು: ಮಳೆಯ ಆರ್ಭಟಕ್ಕೆ ಬಯಲುಸೀಮೆಯ ಹಡಗಲು ಗ್ರಾಮ ಅಕ್ಷರಶಃ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಳೆಯಿಂದ ತೋಟಗಳು ಜಲಾವೃತಗೊಂಡಿವೆ. ಹಾಕಿದ್ದ ರಾಗಿ ಮುಂತಾದ ಬೆಳೆಗಳು ಮುಳುಗಿವೆ. ಚಿಕ್ಕಮಗಳೂರು- ಚಿತ್ರದುರ್ಗ ಗಡಿ ಗ್ರಾಮ ಹಡಗಲು ಗ್ರಾಮಸ್ಥರು ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಗ್ರಾಮದ ಬಳಿ ಮಳೆ ನೀರು ಆವರಿಸಿರುವ ಪಕ್ಷಿನೋಟದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
( ದೃಶ್ಯಕೃಪೆ- ng)
