
ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಎತ್ತಿನ ಭುಜ ಕ್ಕೆ ಚಾರಣ ಕೈಗೊಳ್ಳುವುದನ್ನು ನಿಷೇಧಿಸಿ ಅರಣ್ಯ ಇಲಾಖೆ ಆದೇಶಿಸಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿರುವ
ಎತ್ತಿನ ಭುಜದ ಪ್ರಾಕೃತಿಕ ಸೌಂದರ್ಯ ಸವಿಯಲು ಪ್ರವಾಸಿಗರು ಏಳು ಕಿ.ಮೀ. ಚಾರಣ ಹೋಗುತ್ತಿದ್ದರು. ನಿರಂತರ ಮಳೆಯಿಂದಾಗಿ ಸದಾ ಮಂಜು ಕವಿದಿರುವ ಈ ತಾಣಕ್ಕೆ ವಾಹನಗಳು ಹೋಗುವುದಿಲ್ಲ. ಏನಾದರೂ ಅನಾಹುತಗಳಾದರೆ ರಕ್ಷಣೆಯೂ ಬಹಳ ಕಷ್ಟಕರ. ಈ ಕಾರಣದಿಂದ ಎತ್ತಿನ ಭುಜ ಕ್ಕೆ ಚಾರಣ ನಿಷೇಧಿಸಲು ಸ್ಥಳೀಯರು ಆಗ್ರಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜುಲೈ 1 ರಿಂದ 31 ರ ವರೆಗೆ ಎತ್ತಿನ ಭುಜ ಪ್ರದೇಶದಲ್ಲಿ ಚಾರಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲಿ ಒಬ್ಬ ಕಾವಲುಗಾರನನ್ನೂ ನಿಯೋಜಿಸಲಾಗಿದೆ.
