ಕರ್ತವ್ಯದ ವೇಳೆ ಹೃದಯಾಘಾತ- ಸೆಕ್ಯೂರಿಟಿ ಗಾರ್ಡ್ ನಿಧನ
ಚಿಕ್ಕಮಗಳೂರು:ನಗರದ ಬೇಲೂರು ರಸ್ತೆಯಲ್ಲಿರುವ ದ್ವಿಚಕ್ರವಾಹನ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಹಿರೇಗೌಜ ನಿವಾಸಿ ಶಿವಾನಂದ್( 55) ಮೃತಪಟ್ಟವರು. ಕುರ್ಚಿ ಮೇಲೆ ಕುಳಿತಿದ್ದ ಶಿವಾನಂದ್ ಹೃದಯಾಘಾತಕ್ಕೊಳಗಾಗಿ ಕೆಳಗೆ ಬಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

