ಚಿಕ್ಕಮಗಳೂರು: ಪ್ರವಾಸಿ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೊಪ್ಪ ತಾಲ್ಲೂಕು ಸೀಗೋಡು ಬಳಿ ನಡೆದಿದೆ. ಬೆಂಗಳೂರಿನಿಂದ ಆಗುಂಬೆಗೆ ಹೋಗುತ್ತಿದ್ದ ಬಸ್ ಘಾಟಿ ರಸ್ತೆಯಲ್ಲಿ ಪಲ್ಟಿಯಾಗಿದೆ.ಬಸ್ ನಲ್ಲಿ 17 ಜನರಿದ್ದರು.ಎಲ್ಲರೂ ಬೆಂಗಳೂರಿನಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಚಾಲಕ ಸೇರಿ ಮೂವರಿಗೆ ಗಾಯಗಳಾಗಿವೆ.
