Spread the love
ಕಡೂರು : ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಯುವಕರ ನಡುವೆ ಬುಧವಾರ  ಗಲಾಟೆ ನಡೆದಿದ್ದು,  ಓರ್ವ ಯುವಕನ ಕೈಬೆರಳಿಗೆ ಪೆಟ್ಟಾಗಿದೆ.
ಪಟ್ಟಣದ ಕನಕ ವೃತ್ತದಲ್ಲಿ ಇಬ್ಬರು ಯುವಕರು ಮತ್ತು ಅನ್ಯ ಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಮಯ ಒಬ್ಬ ಯುವಕನ ಮೇಲೆ ಹಲ್ಲೆ ನಡೆದು ಕೈಬೆರಳಿಗೆ ಪೆಟ್ಟಾಗಿದೆ
 ಹಲ್ಲೆಗೊಳಗಾದ ಸಂದೀಪ್ ಮತ್ತು ಮಂಜು ಎಂಬ ಇಬ್ಬರು ಯುವಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಭವಿಸಿದ ಕನಕ ವೃತ್ತದಲ್ಲಿ ಜನರು ಗುಂಪುಗೂಡಿದ್ದು, ಕಡೂರು ಪೊಲೀಸರು   ಗುಂಪನ್ನು ಚದರಿಸಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಭೇಟಿ ನೀಡಿದರು. ಸಿಪಿಐ ರಫೀಕ್ ಹಾಗೂ ಪಿಎಸ್ಐ ಪವನ್ ಕುಮಾರ್ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!