ಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಜಯಪುರ ಸಮೀಪ ಜಲದುರ್ಗದ ಬಳಿ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.
ಚಿಕ್ಕಮಗಳೂರಿನಿಂದ ಉಡುಪಿಗೆ ತರಾಕಾರಿ ಸಾಗಿಸುತ್ತಿತ್ತು. ಸುಮಾರು 30 ಅಡಿ ಆಳದ ಪ್ರಪಾತಕ್ಕೆ ಪಿಕಪ್ ವಾಹನ ಉರುಳಿದರೂ ಅಡಿಕೆ ಮರಗಳಿದ್ದ ಕಾರಣ ವಾಹನ ಬೀಳುವ ವೇಗ ಕಡಿಮೆಯಾಗಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.ಚಾಲಕ ಮತ್ತು ವಾಹನದಲ್ಲಿದ್ದ ಮತ್ತೊಬ್ಬರನ್ನು ಚಿಕಿತ್ಸೆಗಾಗಿ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
