ಕಡೂರು: ತಾಲ್ಲೂಕಿನ ಮಚ್ಚೇರಿಯ ಐತಿಹಾಸಿಕ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಚ್ಚೇರಿಯ ದಿ.ಎ.ಎಲ್.ನಾಗರಾಜಶಾಸ್ತ್ರಿ ಕುಟುಂಬ ವರ್ಗದವರು 34 ನೇ ವರ್ಷದ ಹನುಮಜಯಂತಿ ಪ್ರಯುಕ್ತ ಪವಮಾನ ಹೋಮ ನೆರವೇರಿಸಿದರು.

ಸ್ವಾಮಿಯ ಮೂಲ ಸ್ಥಾನದಲ್ಲಿ ಅಭಿಷೇಕ, ಗಣಪತಿ ಪೂಜೆ, ಪವಮಾನ ಹೋಮ, ಪೂರ್ಣಾಹುತಿ, ಅಲಂಕಾರ,ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಶಿವಮೊಗ್ಗದ ಪುರೋಹಿತ ರಾಜೇಂದ್ರ ಹೊಳ್ಳ ಮತ್ತು ತಂಡದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಎ.ಎನ್.ಉಮಾಶಂಕರ್,ಭಾರತಿ, ಸಮರ್ಥ್, ಮೋಹನ್ ಕಷ್ಯಪ್, ಹನುಮಂತಾಭೋವಿ,ಶ್ರೀಧರ್ ಇದ್ದರು.

