ಚಿಕ್ಕಮಗಳೂರು: ಮಳೆಯ ಆರ್ಭಟದಿಂದ ಹೈರಾಣಾಗಿರುವ ಕಾಫಿ ನಾಡಿನ ಜನರು ಕಾಡಾನೆಗಳ ಹಾವಳಿಗೆ ಕಂಗೆಟ್ಟಿದ್ದಾರೆ.ಆಲ್ದೂರಿನ ಐದಳ್ಳಿಯಲ್ಲಿ ಸುರಿವ ಮಳೆಯಲ್ಲೆ ಒಂಟಿ ಸಲಗವೊಂದು ಮನೆಯೊಂದರ ಬಳಿ ಬಂದು ಅಲ್ಲಿನ ಗಿಡಗಳನ್ನು ತಿನ್ನುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ತೋಟದಲ್ಲಿದ್ದ ಬಾಳೆ , ತೆಂಗು,ಅಡಿಕೆ ಗಿಡಗಳನ್ನು ಸಹ ಆನೆ ನಾಶ ಮಾಡಿದೆ. ಇಲ್ಲಿನ ಜನತೆ ಆನೆ ಹಾವಳಿಯಿಂದ ತತ್ತರಿಸಿದ್ದಾರೆ.
